ಈ ಗಿಡದ ಬೇರು ಸಿಕ್ಕರೆ ದಯವಿಟ್ಟು ಇವತ್ತೇ ಸೇವಿಸಿ ಯಾಕಂದ್ರೆ ಇದು ಸರ್ವ ರೋಗದ ಔಷಧಿ!

Written by Anand raj

Published on:

ಭಾರತದಲ್ಲಿ ಬಹುಹಿಂದಿನಿಂದಲೂ ಗಿಡಮೂಲಿಕೆಗಳಿಂದ ರೋಗವನ್ನು ನಿವಾರಣೆ ಮಾಡುತ್ತಾ ಬಂದಿದ್ದಾರೆ. ಅಂತಹ ಔಷಧೀಯ ಸಸ್ಯಗಳಲ್ಲಿ ಸರ್ಪಗಂಧವೂ ಒಂದು. ಇದು ಒಂದು ಸಣ್ಣ ಸಸ್ಯ. ಉಜ್ವಲ ಹಸುರು ಎಲೆಗಳು, ಕೆಂಪು ಪುಷ್ಪಪತ್ರದ ಬಿಳಿ ಛಾಯೆಯ ಹೂಗಳು ಇದರ ಪ್ರಮುಖ ಲಕ್ಷಣ. ಇದು 2-3 ಅಡಿ ಎತ್ತರ ಬೆಳೆಯಬಹುದು. ಇದರ ಎಲೆ 4ರಿಂದ 6 ಅಂಗುಲ ಉದ್ದ, ಸುಮಾರು ಒಂದೂವರೆಯಿಂದ ಎರಡು ಇಂಚು ಅಂಗುಲ ಅಗಲವಿರುತ್ತದೆ. ಗೊಂಚಲು ಗೊಂಚಲಾಗಿರುವ ಹೂಗಳು ಅರ್ಧ ಅಂಗುಲ ಉದ್ದವಿದ್ದು ಬಿಳಿ ಅಥವಾ ಗುಲಾಬಿ ಬಣ್ಣದಿಂದ ಕೂಡಿರುತ್ತವೆ. ಕಾಯಿಗಳು ನಾಟಿ ಬಟಾಣಿಯ ಗಾತ್ರದಲ್ಲಿದ್ದು, ಪ್ರಾರಂಭದಲ್ಲಿ ಹಸಿರಾಗಿದ್ದು ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರ ಬೇರು ಸುಮಾರು ಒಂದೂವರೆ ಅಡಿ ಭೂಮಿಯೊಳಗೆ ಹೋಗುತ್ತದೆ. ಇದು ಬಹಳ ಕಹಿಯಾಗಿರುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಇದನ್ನು ಸಾಧಾರಣ ತಂಪು ಹವೆಯುಳ್ಳ , ಹೆಚ್ಚು ಮಳೆ ಬೀಳುವ ಹರಿದ್ವರ್ಣ ಕಾಡುಗಳಲ್ಲಿಯೂ ಗುಡ್ಡಗಾಡಿನಲ್ಲಿಯೂ ಕರ್ನಾಟಕದ ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉಡುಪಿ ಮತ್ತು ಉತ್ತರಕನ್ನಡಗಳಲ್ಲಿ ಹೆಚ್ಚಾಗಿ ಕಾಣಬಹುದು. ವಿಷ ಚಿಕಿತ್ಸೆಗೆ ಇದರ ಬೇರು ಉಪಯೋಗವಾಗುವುದರಿಂದ ಮನೆಯ ಎದುರೇ ಸಸ್ಯ ನೆಡುವುದು ಪರಿಪಾಠ.

ಇದು ಅಪ್ರೋ ಸಸ್ಯ ಕುಟುಂಬಕ್ಕೆ ಸೇರಿದ್ದು, ಇದರಲ್ಲಿ ಐದು ಪ್ರಭೇದಗಳಿವೆ. ಕರ್ನಾಟಕದಲ್ಲಿ ರಾವಲ್ಫಿಯ ಸರ್ಪೆಂಟೀನಾ ಮತ್ತು ರಾಲ್ಫಿಯ ಕೆನೆಸೆನ್ಸ್ ಎಂಬ ಎರಡು ಮಾದರಿಗಳು ಕಂಡುಬರುತ್ತವೆ. ಆದರೆ ಎರಡರ ಔಷಧೀಯ ಗುಣಗಳೂ ಒಂದೇ ಆಗಿರುತ್ತವೆ. ಇದಕ್ಕೆ ಹದಿನಾರನೇ ಶತಮಾನದ ಜರ್ಮನಿಯ ರಾವುಲ್ಫ್ ಎಂಬ ವೈದ್ಯ ಹಾಗೂ ಸಸ್ಯಶಾಸ್ತ್ರಜ್ಞನ ಹೆಸರನ್ನು ಇಡಲಾಗಿದೆ.

ಇದಕ್ಕೆ ಕನ್ನಡದಲ್ಲಿ ಸರ್ಪಗಂಧ ಮತ್ತು ಗರುಡಪಾತಾಳ ಚಂದ್ರಿಕೆ ಎಂಬ ಹೆಸರಿದೆ. ಇಂಗ್ಲಿಷ್‌ನಲ್ಲಿ ಖಞಚ್ಝ್ಝ ಞಟಟ್ಞ ಟ್ಝಚ್ಞಠಿ, ಸಂಸ್ಕೃತದಲ್ಲಿ ಸರ್ಪಗಂಧ ಚಂದ್ರಿಕಾ, ಗಂಧನಾಕುಲಿ, ಮಲೆಯಾಳಂನಲ್ಲಿ ಚುವನಾವಿಲ್‌ಪುರಿ ಎಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ‘ಹುಚ್ಚರ ಔಷಧಿ’ ಎಂಬ ಸ್ವಾರಸ್ಯಕರ ಹೆಸರು ಇದಕ್ಕಿದೆ. ಆಂಗ್ಲ ಭಾಷೆಯಲ್ಲಿ ಇದನ್ನು ‘ಸರ್ಪೆಂಟ್‌ವುಡ್’ ಎಂದೂ ಕರೆಯುತ್ತಾರೆ. ಇದರ ಬೇರು ಸರ್ಪದ ಆಕಾರದಲ್ಲಿದ್ದು , ಸರ್ಪದ ವಿಷ ಇಳಿಸುವುದರಿಂದ ಆಯುರ್ವೇದದ ಪ್ರಕಾರ ಇದನ್ನು ‘ಸರ್ಪಗಂಧ’ ಎಂದು ಕರೆಯಲಾಗಿದೆ.

ನಮ್ಮ ಭಾರತದಲ್ಲಿ ಇದನ್ನು 3,000 ವರ್ಷಗಳಿಂದಲೂ ಔಷಧವಾಗಿಉಪಯೋಗಿಸುತ್ತಿದ್ದುದಾಗಿ ಚರಕ ಸಂಹಿತೆ ನಮೂದಿಸಿದೆ. ಇದು ಮಾನವನ ಅನೇಕ ಕಾಯಿಲೆಗಳಿಗೆ ಬಹಳ ಉತ್ತಮವಾದ ಔಷಧ. ಇದರ ಬೇರಿನಲ್ಲಿ 20ಕ್ಕೂ ಹೆಚ್ಚು ನಮೂನೆಯ ರಾಸಾಯನಿಕಗಳ ಕ್ಷಾರ (ಅಲ್ಕಲಾಯ್ಡ್ಸ್) ಇರುವುದರಿಂದ ಅದು ಬೇರೆ ಬೇರೆ ರೋಗಗಳನ್ನು ನಿವಾರಣೆ ಮಾಡುವ ಗುಣವನ್ನು ಹೊಂದಿದೆ. ಇದರ ಬೇರಿನಲ್ಲಿ ‘ರಿಸರ್ಪಿನ್’ ಎಂಬ ಸಸ್ಯಕ್ಷಾರವಿದ್ದು, ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಸರ್ಪಗಂಧದ ಉಳಿದ ಪ್ರಯೋಜನಗಳು ಹೀಗಿವೆ-

ಇದರ ಬೇರನ್ನು ಮುಖ್ಯವಾಗಿ ಖಿನ್ನತೆ, ಜ್ವರ, ನರ ದೌರ್ಬಲ್ಯ, ಹೊಟ್ಟೆ ನೋವು, ಮೂತ್ರದ ತೊಂದರೆ, ಪ್ರಸವದ ತೊಂದರೆ, ವಿಷ ಪ್ರಾಶನದ ಸಂದರ್ಭದಲ್ಲಿ ಶಮನಕಾರಿಯಾಗಿ ಬಳಸಲಾಗುತ್ತಿದೆ.ಇದರ ಬೇರಿನಲ್ಲಿ ನಿದ್ದೆ ಬರಿಸುವ ಉಪಶಾಮಕ ಸ್ತಂಭನ ಗುಣ ಇರುವುದರಿಂದ ಅಪಸ್ಮಾರ (ಮೂರ್ಛೆ ರೋಗ), ರಕ್ತದ ಒತ್ತಡ, ಉನ್ಮಾದ, ಚಿತ್ತಭ್ರಮಣೆ ಮತ್ತು ಕೋಪವನ್ನು ಶಮನ ಮಾಡುವ ಗುಣ ಹೊಂದಿದೆ.ಇದು ಕಹಿ ಗುಣವನ್ನು ಹೊಂದಿದ್ದು ಆಯುರ್ವೇದ ವೈದ್ಯಕೀಯ ದೃಷ್ಟಿಯಲ್ಲಿ ನಂಜು, ಕಜ್ಜಿ, ತುರಿ, ಇಸಬು, ಸರ್ಪಸುತ್ತು (ಹರ್ಪಿಸ್) ಮತ್ತು ಎಲ್ಲಾ ತರಹದ ಚರ್ಮರೋಗಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ.ಬ್ಯಾಕ್ಟೀರಿಯಾ, ಬೂಸ್ಟು, ವಿಷ, ವೈರಸ್ ಮುಂತಾದವುಗಳಿಂದ ಉಂಟಾಗುವ ರೋಗಗಳ ಮೇಲೆ ಇದು ಅತ್ಯತ್ತಮ ಪರಿಣಾಮ ಬೀರುತ್ತದೆ.ಹಾವಿನ ಕಡಿತ ಹಾಗೂ ಚೇಳು, ಬೆಕ್ಕು, ಇಲಿ, ವಿಷಜಂತುಗಳ ಕಡಿತದ ಸಂದರ್ಭದಲ್ಲೂ ಇದನ್ನು ಕೊಡಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸರ್ಪಗಂಧವು ರೋಗನಿರೋಧಕ, ರೋಗನಿವಾರಕ ಮತ್ತು ನಂಜುನಾಶಕವಾಗಿ ಕೆಲಸ ಮಾಡುತ್ತದೆ. ಅಂತೆಯೇ ಆ್ಯಂಟಿಬಯಾಟಿಕ್ ಮತ್ತು ಸ್ಟಿರಾಯ್ಡ್ ತರಹವೂ ಕೆಲಸ ಮಾಡುತ್ತದೆ. ಆದರೆ ಇದು ಇತರೆ ಸ್ಟಿರಾಯ್ಡ್‌ಗಳಂತೆ ದುಷ್ಪರಿಣಾಮ ಬೀರುವುದಿಲ್ಲ. ಇದನ್ನು ಹೋಮಿಯೋಪಥಿ ವೈದ್ಯಪದ್ಧತಿ ಪ್ರಕಾರ ಮದರ್ ಟಿಂಕ್ಚರ್ ಮಾಡಿ ಬಳಸಿದಲ್ಲಿ ಕೆಲವೇ ಹೊತ್ತಿನಲ್ಲಿ ಹೆಚ್ಚಿನ ಪರಿಣಾಮವನ್ನು ಉಂಟುಮಾಡುತ್ತದೆ.

ಹಲವು ವರ್ಷಗಳಿಂದ ಇದರ ಬೇರಿಗೆ ಬಹಳ ಬೇಡಿಕೆ ಇದೆ. ವಿದೇಶದಿಂದ ಈ ಹಿನ್ನೆಲೆಯಲ್ಲಿ ಗಿಡಗಳನ್ನು ರಫ್ತು ಮಾಡಲಾಗುತ್ತಿದೆ. ಇದರಿಂದ ಈ ಗಿಡ ವಿನಾಶದ ಅಂಚಿನಲಿರುವ ಸಸ್ಯಗಳ ಸಾಲಿನಲ್ಲಿ ಸೇರಿಸಲಾಗಿದೆ. ಇದರ ಬೇರಿನಲ್ಲಿರುವ ಮದ್ದಿನ ಗುಣಗಳೇ ಈ ಸಸ್ಯದ ನಾಶಕ್ಕೆ ಕಾರಣವಾಗಿದೆ !

Related Post

Leave a Comment