ಸೌತೆಕಾಯಿ ಸೇವಿಸುವ ಮೊದಲು ತಪ್ಪದೇ ಈ ಲೇಖನ ಓದಿ!

ಅಧಿಕ ಪ್ರಮಾಣದಲ್ಲಿ ನೀರನ್ನು ಹೊಂದಿರುವ ತರಕಾರಿಗಳಲ್ಲಿ ಸೌತೇಕಾಯಿ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ ಅದರಲ್ಲೂ ಪ್ರತಿದಿನ ನಿಯಮಿತವಾಗಿ ಸೌತೆಕಾಯಿಯನ್ನು ತಿನ್ನುವುದರಿಂದ ಮಲಬದ್ಧತೆ ,ಜೀರ್ಣಕ್ರಿಯೆ ,ಮಧುಮೇಹ ,ಕಿಡ್ನಿ ಸಮಸ್ಯೆಯಂತ ಕಾಯಿಲೆಗಳನ್ನು ನಿಯಂತ್ರಿಸಬಹುದು ಹಾಗಿದ್ರೆ ಸೌತೆಕಾಯಿ ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಗಳೇನು ?ಹಾಗೂ ಯಾರೂ ಸೌತೆಕಾಯಿ ಸೇವಿಸಬಾರದು ?ಸೌತೆಕಾಯಿ ಸೇವಿಸುವ ಸರಿಯಾದ ಸಮಯ ಯಾವುದು ?ಎಂದು ತಿಳಿಯೋಣ ಬನ್ನಿ..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಸೌತೆಕಾಯಿಯನ್ನು ಹೆಚ್ಚಾಗಿ ಸಲಾಡ್ ,ಸ್ಯಾಂಡ್ವಿಚ್ ರೂಪದಲ್ಲಿ ಸೇವಿಸಲಾಗುತ್ತದೆ. ಇದನ್ನು ತಿನ್ನುವುದರಿಂದ ನಿರ್ಜಲೀಕರಣ ಕಡಿಮೆಯಾಗುತ್ತದೆ.ಕಡಿಮೆ ಕ್ಯಾಲರಿ ಇರುವುದರಿಂದ ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಸೌತೆಕಾಯಿ ಸೇವನೆಯಿಂದ ಹಲವಾರು ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತದೆ ಅದರಲ್ಲೂ ಮುಖ್ಯವಾಗಿಮಲಬದ್ಧತೆ ನಿವಾರಣೆಗೆ ಉತ್ತಮ ಸೌತೆಕಾಯಿಯಲ್ಲಿ ಕ್ಯಾಲೋರಿಗಳ ಪ್ರಮಾಣ ತುಂಬಾ ಕಡಿಮೆ ಇದೆ ಆದರೆ ಇದರಲ್ಲಿ ಇರುವ ನಾರಿನಂಶವು ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಪ್ರತಿದಿನ ಸೌತೆಕಾಯಿಯನ್ನು ಸೇವಿಸಿ.
ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.ಉರಿಯೂತ ಕಡಿಮೆ ಮಾಡುತ್ತದೆ ತಾಜಾ ಸೌತೆಕಾಯಿ ಅನಗತ್ಯ ಉರಿಯೂತವನ್ನು ಕಡಿಮೆ ಮಾಡುತ್ತದೆ.ಸೌತೆ ಕಾಯಿಗಳಲ್ಲಿ ಫ್ಲ್ಯಮನಾಯ್ಡ್ ಸಮೃದ್ಧವಾಗಿದ್ದು ಉರಿಯೂತವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.ಮಧುಮೇಹಿಗಳಿಗೆ ಪ್ರಯೋಜನಕಾರಿ ಸೌತೆಕಾಯಿಗಳು ಮಧುಮೇಹಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.ಸೌತೆಕಾಯಿ ರಸದಲ್ಲಿ ಇನ್ಸುಲಿನ್ ಉತ್ಪಾದಿಸಲು ಮೇದೋಜೀರಕ ಗ್ರಂಥಿಗೆ ಅಗತ್ಯವಾದ ಹಾರ್ಮೋನ್ ಗಳಿವೆ ಆದ್ದರಿಂದ ಮಧುಮೇಹಿಗಳಿಗೆ ಸೌತೇಕಾಯಿ ಒಂದು ಉತ್ತಮವಾದ ಆಹಾರವೆಂದೇ ಹೇಳಬಹುದು.

ಬಾಯಿಯ ಆರೋಗ್ಯಕ್ಕೆ ಉತ್ತಮ:ಸೌತೆಕಾಯಿ ಬಾಯಿಂದ ಬರುವ ಕೆಟ್ಟ ವಾಸನೆ ಕಡಿಮೆ ಮಾಡುತ್ತದೆ.ಸೌತೆಕಾಯಿಯ ಒಂದು ಚಿಕ್ಕ ತುಂಡನ್ನು ತೆಗೆದುಕೊಂಡು ಅದನ್ನು 30 ಸೆಕೆಂಡುಗಳ ಕಾಲ ನಿಮ್ಮ ನಾಲಿಗೆಯ ಮೇಲೆ ಒತ್ತಿದರೆ ಕೆಟ್ಟ ಉಸಿರಾಟವನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.ಒಸಡುಗಳ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತದೆ
ಮತ್ತು ಹಲ್ಲುಗಳನ್ನು ಆರೋಗ್ಯವಾಗಿರಿಸುತ್ತದೆ.

ಮೂಳೆಗಳನ್ನು ಬಲಪಡಿಸುತ್ತದೆ ಎಲುಬುಗಳನ್ನು ಬಲಪಡಿಸಲು ಸೌತೆಕಾಯಿ ಉತ್ತಮವಾದ ಪರಿಹಾರ.ಆರ್ಥೋ ಟ್ರೋಫಿಕ್ ಚಟುವಟಿಕೆಗಳನ್ನು ಉತ್ತೇಜಿಸುವ ಮೂಲಕ ಎಲುಬುಗಳನ್ನು ಬಲಪಡಿಸುವಲ್ಲಿ ಸೌತೆ ಕಾಯಿಗಳಲ್ಲಿನ ವಿಟಮಿನ್ ಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ.ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ ಸೌತೆಕಾಯಿಯಲ್ಲಿ ಅಧಿಕ ಪ್ರಮಾಣದ ನೀರಿನ ಅಂಶವಿದ್ದು ಹಾಗೂ ಕಡಿಮೆ ಕ್ಯಾಲರಿ ಒಳಗೊಂಡಿರುವುದರಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಸೌತೆಕಾಯಿಯ ಒಂದು ವರದಾನವಾಗಿದೆ.ಮೆದುಳಿಗೆ ಸೌತೆಕಾಯಿ ತುಂಬಾ ಒಳ್ಳೆಯದು ಸೌತೆಕಾಯಿಯಲ್ಲಿ ಉರಿಯೂತ ಶಮನಕಾರಿ ಫ್ಲ್ಯಾಮನಾಯ್ಡ್ ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಇದು ನರಕೋಶಗಳ ಸಂಪರ್ಕವನ್ನು ಹೆಚ್ಚಿಸುತ್ತದೆ.ಇದೇ ಕಾರಣಕ್ಕಾಗಿ ಪ್ರತಿನಿತ್ಯ ಸೌತೆಕಾಯಿ ಸೇವಿಸಿ.ಇದು ಕೇವಲ ನೆನಪಿನ ಶಕ್ತಿಯ ಬಗ್ಗೆ ಕಾಳಜಿ ವಹಿಸುವುದು ಮಾತ್ರವಲ್ಲದೆ ನರಕೋಶಗಳಿಗೆ ವಯಸ್ಸಾಗುವುದನ್ನು ತಡೆಯುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು ಸೌತೆಕಾಯಿಯಲ್ಲಿ ಉನ್ನತ ಮಟ್ಟದ ಪೊಟ್ಯಾಷಿಯಂ ಇದ್ದು,ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ತುಂಬಾನೇ ಪರಿಣಾಮಕಾರಿ.ಇದು ಹೃದಯದ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ. ಸೌತೆಕಾಯಿಯಲ್ಲಿ ನಾರಿನ ಅಂಶವಿದ್ದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗದಂತೆ ತಡೆಯುತ್ತದೆ ಮತ್ತು ಹೃದಯದ ತಡೆಯನ್ನು ನಿವಾರಿಸುತ್ತದೆ.

ನಿಶ್ಯಕ್ತಿ ದೂರವಾಗುತ್ತದೆ ಒತ್ತಡದಿಂದ ಉಂಟಾಗುವ ತಲೆನೋವಿಗೆ ಉತ್ತಮ ಪರಿಹಾರ.ಸೌತೆಕಾಯಿ ನಿಶ್ಯಕ್ತಿ ನಿವಾರಣೆ ಮಾಡುತ್ತದೆ.ಒತ್ತಡದಿಂದ ಕಾಣಿಸಿಕೊಳ್ಳುವಂತಹ ತಲೆನೋವು ನಿವಾರಣೆಗೆ ಉತ್ತಮ ಪರಿಹಾರವನ್ನು ಒದಗಿಸುವ ತರಕಾರಿಯಾಗಿದೆ.ಒತ್ತಡದಿಂದ ತಲೆ ನೋವು ಕಾಣಿಸಿಕೊಂಡಾಗ ಸೌತೆಕಾಯಿ ಸಲಾಡ್ ಅಥವಾ ಜ್ಯುಸನ್ನು ಸೇವಿಸಿ.ಸೌತೆಕಾಯಿಯಲ್ಲಿ ಫಾಲಿ ಫಿನೈಲ್ ನಗಳು ಮತ್ತು ಫೈಟೋ ನ್ಯೂಟ್ರಿಯಂಟ್ ಗಳು ಇರುವ ಕಾರಣದಿಂದಾಗಿ ಇದು ಒತ್ತಡವನ್ನು ನಿವಾರಿಸುತ್ತದೆ. ಸೌತೆಕಾಯಿಯನ್ನು ಯಾವಾಗ ಸೇವಿಸಬೇಕು ?ಹಾಗೂ ಯಾರು ಸೇವಿಸಬಾರದು ? ನಿಮಗೆ ಆಶ್ಚರ್ಯವಾಗಬಹುದು ಇಷ್ಟೆಲ್ಲ ಪ್ರಯೋಜನಗಳನ್ನು ಹೊಂದಿರುವ ಸೌತೆಕಾಯಿ ಕೆಲವೊಮ್ಮೆ ಅಡ್ಡ ಪರಿಣಾಮವನ್ನು ಬೀರುತ್ತವೆ. ಸೌತೆಕಾಯಿ ಕೆಲವು ಜನರಿಗೆ ಅಲರ್ಜಿ ಉಂಟು ಮಾಡುತ್ತದೆ ಅಂಥವರು ಸೌತೆಕಾಯಿಯನ್ನು ಸೇವಿಸಬಾರದು.

ಉಸಿರಾಟದ ತೊಂದರೆ ಇರುವವರು ಪ್ರತಿನಿತ್ಯ ಸೌತೆಕಾಯಿ ಸೇವಿಸಬಾರದು. ಇದು ಶೀತ ಕಾರಕವಾಗಿದ್ದು ಇದು ನಿಮ್ಮ ಉಸಿರಾಟದ ತೊಂದರೆಯನ್ನು ಇನ್ನೂ ಹೆಚ್ಚಿಸಬಹುದು.ಗರ್ಭಿಣಿ ಮಹಿಳೆಯರು ಕೂಡ ಅಗತ್ಯಕ್ಕಿಂತ ಹೆಚ್ಚು ಸೌತೆಕಾಯಿಯನ್ನು ಸೇವಿಸಬಾರದು.ಸೌತೆಕಾಯಿ ಸೇವಿಸಿದ ನಂತರ ಏನನ್ನೂ ಸೇವಿಸಬಾರದು.ಸೌತೆಕಾಯಿ ಸೇವಿಸಿದ ತಕ್ಷಣ ನೀರು ಕುಡಿಯಬಾರದು ಏಕೆಂದರೆ ಇದರಿಂದ ಸೌತೆಕಾಯಿಯಿಂದ ನಮ್ಮ ದೇಹಕ್ಕೆ ದೊರೆಯುವ ಪೋಷಕಾಂಶಗಳು ನಷ್ಟವಾಗುತ್ತದೆ.ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸಹ ಹಾನಿ ಮಾಡುತ್ತದೆ ಅಷ್ಟೇ ಅಲ್ಲದೆ ಅತಿಸಾರ ಮತ್ತು ಭೇದಿ ಸಮಸ್ಯೆ ಉಂಟಾಗುತ್ತದೆ.ಸೌತೆಕಾಯಿಯನ್ನು ಯಾವ ಸಮಯದಲ್ಲಿ ಸೇವಿಸಬಾರದು ?ಸೌತೆಕಾಯಿಯನ್ನು ರಾತ್ರಿ ಹೊತ್ತು ಆದಷ್ಟು ಸೇವಿಸದೆ ಇದ್ದರೆ ಉತ್ತಮ.ಶೀತ ಮತ್ತು ಕಫ ಸಂಬಂಧಿ ತೊಂದರೆ ಇರುವವರು ರಾತ್ರಿ ಹೊತ್ತು ಸೌತೆಕಾಯಿಯನ್ನು ಸೇವಿಸಬಾರದು.ಇದು ಗಂಟಲಿನ ಕೆರೆತ,ಕೆಮ್ಮು ಮುಂತಾದ ತೊಂದರೆ ರಾತ್ರಿ ಸೌತೆಕಾಯಿ ಸೇವಿಸುವುದರಿಂದ ಎದುರಾಗಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಧನ್ಯವಾದಗಳು.

Leave A Reply

Your email address will not be published.