ಕಪ್ಪು ಉಪ್ಪು ಇಂತವರು ಬಳಸೋದ್ರಿಂದ ಪರಿಣಾಮ ಏನಾಗತ್ತೆ ಗೊತ್ತಾ!

Written by Anand raj

Published on:

ಉಪ್ಪು ಎಂದರೆ ತಕ್ಷಣಕ್ಕೆ ಕಣ್ಣ ಮುಂದೆ ಬರುವುದು ಬಿಳಿಬಿಳಿಯಾಗಿ ಇರುವಂತಹ ಹರಳುಗಳು. ಯಾವುದೇ ಅಡುಗೆಯಾದರೂ ಉಪ್ಪಿಲ್ಲದೆ ಅದು ಪೂರ್ತಿಯಾಗದು. ಸಾಮಾನ್ಯವಾಗಿ ನಾವೆಲ್ಲರು ಕಲ್ಲುಪ್ಪು ಮತ್ತು ಹುಡಿ ಉಪ್ಪು ಬಳಕೆ ಮಾಡುತ್ತೇವೆ. ಕಪ್ಪು ಉಪ್ಪನ್ನು ಕೂಡ ಇಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಹಿಂದಿನಿಂದಲೂ ಭಾರತೀಯರು ಇದನ್ನು ಬಳಸಿಕೊಂಡು ಬರುತ್ತಿದ್ದಾರೆ ಮತ್ತು ಇದರಲ್ಲಿ ಔಷಧೀಯ ಗುಣಗಳು ಇವೆ ಮತ್ತು ಆಯುರ್ವೇದದ ಪ್ರಕಾರ ಇದು ಹಲವಾರು ಚಿಕಿತ್ಸಕ ಗುಣ ಹೊಂದಿದೆ. ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು ಕಪ್ಪು ಉಪ್ಪು ಬಳಸಿಕೊಂಡು ನಿವಾರಣೆ ಮಾಡಬಹುದು. ಕಪ್ಪು ಉಪ್ಪಿನಲ್ಲಿ ಖನಿಜಾಂಶಗಳು ಮತ್ತು ವಿಟಮಿನ್ ಗಳು ಅಗಾಧ ಪ್ರಮಾಣದಲ್ಲಿದೆ. ನಿಯಮಿತವಾಗಿ ಕಪ್ಪು ಉಪ್ಪು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಇದರ ಆರೋಗ್ಯ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಇದು ಕರುಳಿನ ಕ್ರಿಯೆ ಮತ್ತು ತೂಕ ಇಳಿಸಿಕೊಳ್ಳಲು ಕೂಡ ಪರಿಣಾಮಕಾರಿ ಆಗಿರುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಪ್ಪು ಉಪ್ಪಿನಿಂದ ಸಿಗುವಂತಹ ಆರೋಗ್ಯ ಲಾಭಗಳು–ಕಪ್ಪು ಉಪ್ಪನ್ನು ಹಿಮಾಲಯನ್ ಕಪ್ಪು ಉಪ್ಪು ಎಂದು ಕೂಡ ಕರೆಯುವರು. ಇದು ಭಾರತದಲ್ಲಿ ಸುಲಭವಾಗಿ ಸಿಗುವುದು ಮತ್ತು ಇದರ ರುಚಿಯು ತುಂಬಾ ವೈವಿಧ್ಯವಾಗಿರುವುದು. ಕಪ್ಪು ಉಪ್ಪನ್ನು ಹೆಚ್ಚಾಗಿ ಸಲಾಡ್ ಮತ್ತು ಪಾಸ್ತಾಗೆ ಅಲಂಕಾರ ಮಾಡಲು ಬಳಸಲಾಗುತ್ತದೆ. ಹಿಮಾಲಯನ್ ಶ್ರೇಣಿಯಲ್ಲಿ ಸಿಗುವಂತಹ ಕಪ್ಪು ಉಪ್ಪು ಇಂದು ಭಾರತದೆಲ್ಲೆಡೆ ತುಂಬಾ ಜನಪ್ರಿಯವಾಗಿದೆ. ಕಪ್ಪು ಉಪ್ಪಿನಲ್ಲಿ ಕಬ್ಬಿನಾಂಶ, ಪೊಟಾಶಿಯಂ ಮತ್ತು ಇತರ ಹಲವು ರೀತಿಯ ಖನಿಜಾಂಶಗಳು ಇವೆ. ಇದರಲ್ಲಿ ಸಲ್ಫರ್ ಅಂಶವು ಇರುವ ಕಾರಣದಿಂದಾಗಿ ಇದು ಯಾವಾಗಲೂ ಬೇಯಿಸಿದ ಮೊಟ್ಟೆಯ ಹಳದಿ ಲೋಳೆಯಂತೆ ಸುವಾಸನೆ ಬರುವುದು. ಕಪ್ಪು ಉಪ್ಪಿನಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ತಿಳಿಯಲು ನೀವು ಇದನ್ನು ಮುಂದೆ ಓದುತ್ತಾ ಸಾಗಿ.

ಹೊಟ್ಟೆ ಉಬ್ಬರ ಮತ್ತು ಆಸಿಡಿಟಿ ನಿವಾರಿಸುವುದು–ಆಯುರ್ವೇದಿಕ್ ಔಷಧಿಗಳಲ್ಲಿ ಕಪ್ಪು ಉಪ್ಪನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ. ಚೂರ್ಣ ಮತ್ತು ಜೀರ್ಣಕ್ರಿಯೆ ಮಾತ್ರೆಗಳಿಗೆ ಇದರ ಬಳಕೆ ಮಾಡುವರು. ಕಪ್ಪು ಉಪ್ಪಿನಲ್ಲಿ ಇರುವಂತಹ ಕ್ಷಾರೀಯ ಗುಣವು ಹೊಟ್ಟೆಯ ಸಮಸ್ಯೆ ನಿವಾರಣೆ ಮಾಡುವುದು. ಇದು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಗೆ ಅವಕಾಶವೇ ನೀಡದು. ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಯನ್ನು ಇದು ನಿವಾರಣೆ ಮಾಡುವುದು ಮತ್ತು ಆಮ್ಲೀಯ ಹಿಮ್ಮುಖ ಹರಿವನ್ನು ಇದು ಕಡಿಮೆ ಮಾಡುವುದು. ಇದರಲ್ಲಿ ಸೋಡಿಯಂ ಕ್ಲೋರೈಡ್, ಸಲ್ಫೇಟ್, ಕಬ್ಬಿನಾಂಶ, ಮ್ಯಾಂಗನೀಸ್, ಫೆರ್ರಿಕ್ ಆಕ್ಸೈಡ್ ಇದ್ದು, ವಾಯುವನ್ನು ದೂರವಿಡುವುದು.ಸಲಹೆ: ಹೊಟ್ಟೆ ಭಾರವಾಗುವ ಅಥವಾ ಎಣ್ಣೆಯುಕ್ತ ಆಹಾರ ಸೇವನೆ ಬಳಿಕ ನೀವು ಅರ್ಧ ಚಮಚ ಕಪ್ಪು ಉಪ್ಪನ್ನು ನೀರಿಗೆ ಹಾಕಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ.

ಸ್ನಾಯು ಸೆಳೆತ ತಡೆಯುವುದು–ಪೊಟಾಶಿಯಂ ಅಧಿಕವಾಗಿ ಇರುವಂತಹ ಕಪ್ಪು ಉಪ್ಪು ಸ್ನಾಯುಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವುದು ಮತ್ತು ಸ್ನಾಯು ಸೆಳೆತ ಮತ್ತು ನೋವನ್ನು ಕಡಿಮೆ ಮಾಡುವುದು. ಕಪ್ಪು ಉಪ್ಪಿನ ಮತ್ತೊಂದು ಲಾಭವೆಂದರೆ ಅದು ನಮ್ಮ ಆಹಾರದಲ್ಲಿ ಇರುವಂತಹ ಪ್ರಮುಖ ಖನಿಜಾಂಶಗಳನ್ನು ಹೀರಿಕೊಂಡು ದೇಹಕ್ಕೆ ನೀಡುವುದು.ಸಲಹೆ: ಬಿಳಿ ಉಪ್ಪಿನ ಬದಲಿಗೆ ಕಪ್ಪು ಉಪ್ಪು ಬಳಸಿಕೊಂಡು ಅದರ ಲಾಭ ಪಡೆಯಿರಿ ಮತ್ತು ಸ್ನಾಯು ಸೆಳೆತ ದೂರವಿಡಿ.

ಮಧುಮೇಹ ನಿಯಂತ್ರಣದಲ್ಲಿಡುವುದು–ಮಧುಮೇಹದ ಅಪಾಯವಿದ್ದರೆ ಅಥವಾ ಕಾರಣಗಳು ಇದ್ದರೆ ಆಗ ನೀವು ನಿಯಮಿತವಾಗಿ ಬಳಸುವ ಉಪ್ಪಿನ ಬದಲು ಕಪ್ಪು ಉಪ್ಪು ಬಳಸಿಕೊಳ್ಳಿ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನು ಪರಿಣಾಮಕಾರಿ ಆಗಿ ನಿಯಂತ್ರಣದಲ್ಲಿ ಇಡುವುದು. ಕಪ್ಪು ಉಪ್ಪು ಮಧುಮೇಹಿಗಳಿಗೆ ಒಂದು ವರವೆಂದರೂ ತಪ್ಪಾಗದು.ಸಲಹೆ: ಪ್ರತೀ ದಿನ ಬೆಳಗ್ಗೆ ಒಂದು ಲೋಟ ನೀರಿಗೆ ಕಪ್ಪು ಉಪ್ಪು ಹಾಕಿಕೊಂಡು ಕುಡಿಯಿರಿ. ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ರೋಗಗಳನ್ನು ದೂರವಿಡುವುದು.
ರಕ್ತ ಸಂಚಾರವನ್ನು ಉತ್ತೇಜಿಸುವುದು

ಕಪ್ಪು ಉಪ್ಪನ್ನು ಬಳಕೆ ಮಾಡಿದರೆ ಅದು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸುವುದು. ಇದರಲ್ಲಿ ಸೋಡಿಯಂ ಅಂಶವು ಕಡಿಮೆ ಇರುವ ಕಾರಣದಿಂದಾಗಿ ಇದು ರಕ್ತ ತೆಳು ಮಾಡಲು ನೆರವಾಗುವುದು ಮತ್ತು ಇದರಿಂದಾಗಿ ರಕ್ತ ಸಂಚಾರವು ಸುಗಮವಾಗಿ ಆಗುವುದು. ಇದೇ ರೀತಿಯಲ್ಲಿ ದೇಹದಲ್ಲಿನ ರಕ್ತದೊತ್ತಡವನ್ನು ಇದು ಕಾಪಾಡುವುದು. ರಕ್ತ ಹೆಪ್ಪುಗಟ್ಟುವಿಕೆ ತಡೆಯುವುದು ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ನಿವಾರಿಸುವುದು.ಸಲಹೆ: ಸಮುದ್ರ ಉಪ್ಪು, ಕಲ್ಲುಪ್ಪು, ಬೆಳ್ಳುಳ್ಳಿ ಉಪ್ಪು, ನೈಸರ್ಗಿಕ ಹುಡಿಉಪ್ಪು ಎಲ್ಲದರಲ್ಲಿ ಸೋಡಿಯಂ ಅಧಿಕವಾಗಿ ಇದೆ. ರಕ್ತದೊತ್ತಡದ ಸಮಸ್ಯೆ ಇರುವವರು ಇದರ ಬಳಕೆ ಮಾಡಬಾರದು.

ಗಂಟಿನ ಸಮಸ್ಯೆಗೆ ಪರಿಹಾರ–ಗಂಟು ನೋವು ಅಥವಾ ದೇಹದಲ್ಲಿ ಇತರ ಯಾವುದೇ ರೀತಿಯ ನೋವಿದ್ದರೆ ಆಗ ನೀವು ಕಪ್ಪು ಉಪ್ಪು ಬಳಸಿಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಕಪ್ಪು ಉಪ್ಪು ಬಳಸಿಕೊಂಡು ಬಿಸಿ ಶಾಖ ನೀಡಿದರೆ ಅದರಿಂದ ಗಂಟು ನೋವು ಕಡಿಮೆ ಆಗುವುದು. ಒಂದು ಸ್ವಚ್ಛ ಬಟ್ಟೆಗೆ ಕಪ್ಪು ಉಪ್ಪು ಹಾಕಿ ಮತ್ತು ಇದನ್ನು ತವಾದಲ್ಲಿ ಬಿಸಿ ಮಾಡಿ. ನೀವು ಇದನ್ನು ಸುಡದಂತೆ ಎಚ್ಚರ ವಹಿಸಿ. ಇದರ ಬಳಿಕ ಬಾಧಿತ ಜಾಗಕ್ಕೆ 10-15 ನಿಮಿಷ ಕಾಲ ಶಾಖ ಇಡಿ.ಸಲಹೆ: ಎರಡು ಸಲ ನೀವು ಇದನ್ನು ಮಾಡಿದರೆ ಆಗ ಬೇಗನೆ ನೋವಿನಿಂದ ಪರಿಹಾರ ಸಿಗುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಪ್ಪು ಉಪ್ಪು ತೂಕ ಇಳಿಸಲು ಸಹಕಾರಿ–ಕಪ್ಪು ಉಪ್ಪಿನಲ್ಲಿ ಇರುವಂತಹ ಕರಗಿಸುವ ಮತ್ತು ವಿಭಜಿಸುವಂತಹ ಗುಣವು ತೂಕ ಇಳಿಸಲು ಬಯಸುತ್ತಿರುವ ಜನರಿಗೆ ತುಂಬಾ ಒಳ್ಳೆಯದು. ಇದು ಕರುಳಿನ ಕ್ರಿಯೆಗೆ ಸಹಕಾರಿ. ಮಲಬದ್ಧತೆ, ಹೊಟ್ಟೆಉಬ್ಬರ ಸಮಸ್ಯೆಯನ್ನು ನಿವಾರಣೆ ಮಾಡುವ ಕಪ್ಪು ಉಪ್ಪು ತೂಕ ಇಳಿಸಲು ಸಹಕಾರಿ ಆಗಿರುವುದು.ಸಲಹೆ: ತೂಕ ಇಳಿಸಲು ಬಯಸಿದ್ದರೆ ಆಗ ನೀವು ಉಪ್ಪಿನ ಬದಲಿಗೆ ಕಪ್ಪು ಉಪ್ಪು ಬಳಸಿ.

Related Post

Leave a Comment